Chania

ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ
ಡಾ.ಎಂ.ಚಿದಾನಂದಮೂರ್ತಿ

 ಭಾರತದ ಪ್ರಾಂತಗಳಲ್ಲಿ ಒಂದಾಗಿರುವಕರ್ನಾಟಕವು,ಒಂದು ಲಕ್ಷದತೊಂಬತ್ತೆರಡು ಸಾವಿರಚದರಕಿಲೋಮೀಟರ್ ವಿಸ್ತಿÃರ್ಣವನ್ನು ಹೊಂದಿದ್ದು,ಆರುಕೋಟಿಯ ಹತ್ತು ಲಕ್ಷಜನಸಂಖ್ಯೆಯನ್ನು ಪಡೆದಿದೆ. ಬೆಂಗಳೂರು ಗ್ರಾಮಾಂತರಜಿಲ್ಲೆ ಸೇರಿದಂತೆ ಮೂವತ್ತು ಜಿಲ್ಲೆಗಳ ರಾಜ್ಯವು ಸಮಕಾಲೀನದಲ್ಲಿ ಮತ್ತುಇತಿಹಾಸದಲ್ಲಿ ಭಾರತೀಯ ಸಂಸ್ಕೃತಿಗೆಕೊಟ್ಟಿರುವಕೊಡುಗೆ ಬಹು ದೊಡ್ಡದು

ಕರ್ನಾಟಕಕ್ಕೆತನ್ನದೇಆದಒಂದುಚರಿತ್ರೆಇದೆ, ಸಂಸ್ಕೃತಿಇದೆ.ವಾಸ್ತವವಾಗಿ ಇಂತಹ ಹಲವು ಪ್ರಾದೇಶಿಕ ಸಂಸ್ಕೃತಿಗಳ ಮೊತ್ತವೇ ಭಾರತೀಯ ಸಂಸ್ಕೃತಿ ಎನ್ನಿಸಿಕೊಳ್ಳುತ್ತದೆ.ಸಂಸ್ಕೃತಿಎನ್ನುವ ಪದಕ್ಕೆಉತ್ತಮ ನಡವಳಿಕೆ; ನುಡಿಯಲ್ಲಿ ಸೌಜನ್ಯ, ಸಭ್ಯತೆ-ಇವೇ ಮೊದಲಾದ ಅರ್ಥಗಳಿದ್ದರೂ,ಅದಕ್ಕೆಒಂದು ನಾಡಿನಜನತೆಯಒಟ್ಟಾರೆಯಾದಜೀವನ ವಿಧಾನ ಎಂಬ ಒಂದುಗಮನಾರ್ಹಅರ್ಥವೂಉಂಟು. ಎರಡೂ ಅರ್ಥಗಳಲ್ಲಿ ಕರ್ನಾಟಕವು ಸಂಸ್ಕೃತಿಯಕ್ಷೆÃತ್ರದಲ್ಲಿ ಪಡೆದಿರುವ ಸಿದ್ಧಿ ದೊಡ್ಡದು.

ಸಾಹಿತ್ಯ, ಶಿಲ್ಪ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ಆಡಳಿತ ಇವೇ ಮೊದಲಾದ ಕ್ಷೆÃತ್ರಗಳಲ್ಲಿ ಕರ್ನಾಟಕವುಅಪಾರವಾದ ಸಾಧನೆಯನ್ನು ಮಾಡಿದೆ.ಸತ್ಯ, ಔದರ್ಯ, ದೇಶಪ್ರೆÃ, ಶರ್ಯ, ಕರುಣೆ, ಧರ್ಮ ಸಹಿಷ್ಣುತೆ, ಅಹಿಂಸೆ ಇವೇ ಮೊದಲಾದ ಗುಣಗಳು ಅಥವಾಮೌಲ್ಯಗಳು ಕನ್ನಡಿಗರ ಬದುಕನ್ನುತಿದ್ದಿ ರೂಪಿಸಿವೆ. ಭಾರತದ ಸಂಸ್ಕೃತಿ ಸಂಪನ್ನ ಪ್ರಾಂತಗಳಲ್ಲಿ ಕರ್ನಾಟಕಕ್ಕೆಒಂದು ವಿಶಿಷ್ಟ ಸ್ಥಾನವಿದೆ.

ಕರ್ನಾಟಕ : ಹೆಸರು ಮತ್ತು ಪ್ರಾಚೀನತೆ

ಕರ್ನಾಟಕಎಂಬದು ನಾಡಿನ ಹೆಸರನ್ನೂ,ಅದರತದ್ಭವವಾದಕನ್ನಡಎಂಬುದು ನಾಡಿನಜನಆಡುವ ಭಾಷೆಯನ್ನೂ ಸೂಚಿಸುತ್ತದೆಎಂಬುದನ್ನು ಬಹು ಜನಒಪ್ಪಿಕೊಂಡಿದ್ದಾರೆ. ಕೆಲವೊಮ್ಮೆಕರ್ನಾಟಕ ಭಾಷೆ’, ‘ಕನ್ನಡ ನಾಡುಎಂದರೂತಪ್ಪಾಗುವುದಿಲ್ಲ. ‘ಕರ್ನಾಟಕಎಂದರೆಎತ್ತರದ ನಾಡುಎಂದು ಕೆಲವರು, ಇನ್ನು ಕೆಲವರುಕರಿಯ ನಾಡು’ (ಕಪ್ಪು ಮಣ್ಣಿನ ನಾಡು) ಎಂದುಅರ್ಥ ಹೇಳುತ್ತಾರೆ. ಎರಡನೆಯಅರ್ಥ ಬಹುಜನರಒಪ್ಪಿಗೆಯನ್ನು ಪಡೆದಿದೆ. ಎರಡನೆಯಅರ್ಥ ಬರಲುಉತ್ತರಮತ್ತು ಮಧ್ಯ ಕರ್ನಾಟಕಗಳಲ್ಲಿ 
ಕರಿಯಎರೆ ಮಣ್ಣಿನ ಫಲವತ್ತಾದ ಭೂಮಿಇರುವುದೇಕಾರಣ.ಒಮ್ಮೆ ನೀರನ್ನು ಹಾಕಿದರೆ ಬಹುಕಾಲ ಹಿಡಿದಿಟ್ಟುಕೊಳ್ಳುವ ಮಣ್ಣುಅದಾಗಿರುವುದರಿಂದಅಲ್ಲಿಯ ಬೆಳೆಗಳಲ್ಲಿ ವೈವಿಧ್ಯವೂಇದೆ.
ನಾಡಿನ ಹೆಸರುಕ್ರಿಸ್ತಪೂರ್ವದಷ್ಟು ಹಳೆಯದು.ವ್ಯಾಸರ ಸಂಸ್ಕೃತ ಮಹಾಭಾರತದಲ್ಲಿಕರ್ಣಾಟಕಹೆಸರು ಬಂದಿದೆ.ಕ್ರಿಸ್ತಶಕಎರಡನೆಯ ಶತಮಾನದಶಿಲಪ್ಪದಿಗಾರಮ್ಎಂಬ ತಮಿಳು ಕಾವ್ಯದಲ್ಲಿಕನ್ನಡಿಗರನ್ನುಕರುನಾಡರ್ಎಂದುಕರೆದಿದೆ.ಸಂಸ್ಕೃತ ಕಾವ್ಯಗಳಲ್ಲಿ ಕರ್ನಾಟಕವನ್ನುಒಮ್ಮೊಮ್ಮೆಕುಂತಲವೆಂದೂಕರೆದಿರುವುದುಂಟು.ಕರ್ನಾಟಕದದಕ್ಷಿಣದತುದಿಯನ್ನುಪುನ್ನಾಡು’, ‘ಮಹಿಷಮಂಡಲ’ (ಇದೇ ಈಗಿನ ಮೈಸೂರು) ಎಂದುಕರೆಯುತ್ತಿದ್ದರು.

ಇತಿಹಾಸಪೂರ್ವಯುಗ

ಕರ್ನಾಟಕದಲ್ಲಿ ಬಹು ಹಿಂದೆಯೇಜನವಸತಿಯುಇದ್ದಿತೆಂಬುದಕ್ಕೆಇಲ್ಲಿ ನಡೆದಿರುವ ಹಲವು ಭೂಶೋಧಗಳು ಸಾಕ್ಷಿ ನೀಡುತ್ತವೆ. ಹಲವು ಸಾವಿರ ವರ್ಷಗಳ ಹಿಂದೆ ಗುಹೆಗಳಲ್ಲಿ ವಾಸವಾಗಿದ್ದು, ಕಲ್ಲುಗಳನ್ನೆÃ ಆಯುಧಗಳನ್ನಾಗಿ ಮಾಡಿಕೊಂಡು,ಬೇಟೆಯನ್ನೆÃ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದ ಆದಿಮಾನವರುತುಮಕೂರುಜಿಲ್ಲೆಯ ಕಿಬ್ಬನಹಳ್ಳಿ, ಚಿತ್ರದುರ್ಗಜಿಲ್ಲೆಯ ಬ್ರಹ್ಮಗಿರಿ, ಮೈಸೂರುಜಿಲ್ಲೆಯ ಹೆಮ್ಮಿಗೆ, ಬಳ್ಳಾರಿ ಜಿಲ್ಲೆಯತೆಕ್ಕಲಕೋಟೆ, ಬಿಜಾಪುರಜಿಲ್ಲೆಯಖ್ಯಾಡ,ಗುಲ್ಬರ್ಗಜಿಲ್ಲೆಯ ಹುಣಸಗಿ ಇವೇ ಮೊದಲಾದೆಡೆಗಳಲ್ಲಿ ವಾಸಿಸುತ್ತಿದ್ದರು. ಉತ್ತರಕರ್ನಾಟಕದ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಧ್ಯಕರ್ನಾಟಕದತುಂಗಭದ್ರೆ, ದಕ್ಷಿಣಕರ್ನಾಟಕದಕಾವೇರಿ ನದಿಗಳ ದಂಡೆಗಳು ಪ್ರಾಚೀನ ಮಾನವನ ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದವು.

ಅಷ್ಟೆÃ ಅಲ್ಲ, ಮುಂದೆಯೂಇತಿಹಾಸಕಾಲದಲ್ಲಿ, ನದಿಯ ದಂಡೆಗಳಲ್ಲಿ ಹಲವಾರು ಸಾಂಸ್ಕೃತಿಕ ಕೇಂದ್ರಗಳು ವರ್ಧಿಸಿದುವು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಸನ್ನತಿ, ಬನವಾಸಿ, ಶ್ರಿÃರಂಗಪಟ್ಟಣ, ಹಂಪಿ, ಬೇಲೂರು, ತಲಕಾಡುಇವೆಲ್ಲ ನದೀತೀರದಅಥವಾ ನದಿಗೆ ಬಹು ಸಮೀಪದ ಪಟ್ಟಣಗಳಾಗಿವೆ. (ನದಿಗಳು ಎಲ್ಲ ಸಂಸ್ಕೃತಿಗಳ ಬೆಳವಣಿಗೆಯಲ್ಲೂ ಮಹತ್ತರ ಪಾತ್ರವನ್ನು ವಹಿಸಿವೆ)ಕ್ರಿಸ್ತಪೂರ್ವ ೨೫೦೦ರಲ್ಲಿ ಪ್ರವರ್ಧಮಾನವಾಗಿ ಅಂದಿನ ವಿಶ್ವದಗಮನಾರ್ಹ ಸಂಸ್ಕೃತಿಗಳ ಸಾಲಲ್ಲಿ ಒಂದಾಗಿರುವ ಮೊಹೆಂಜೊದಾರೋದ (ಇದು ಈಗಿನ ಪಾಕಿಸ್ತಾನದಲ್ಲಿದೆ) ಸಿಂಧೂ ಕಣಿವೆಯ ಸಂಸ್ಕೃತಿಯಜೊತೆಕರ್ನಾಟಕವು ವ್ಯಾಪಾರ ಸಂಪರ್ಕವನ್ನು ಪಡೆದಿತ್ತು. ಅಲ್ಲಿದೊರಕಿರುವಚಿನ್ನದ ಒಡವೆಗಳ ಲೋಹವು ಕರ್ನಾಟಕದಕೋಲಾರಚಿನ್ನದಗಣಿ ಪ್ರದೇಶದ್ದು.

ಧಾರವಾಡಜಿಲ್ಲೆಯ ಹಳ್ಳೂರಿನಲ್ಲಿ ಕ್ರಿಸ್ತಪೂರ್ವಒಂಬತ್ತನೆಯ ಶತಮಾನದಕಬ್ಬಿಣವುದೊರಕಿದೆ.ಭಾರತದಲ್ಲಿಕಬ್ಬಿಣದ ಬಳಕೆ ಆರಂಭವಾದುದು ಮೊದಲುಕರ್ನಾಟಕದಲ್ಲಿ.ತಂತ್ರಜ್ಞಾನದ ಬೆಳವಣಿಗೆಯಲ್ಲಿ ಚಿನ್ನಕ್ಕಿಂತಕಬ್ಬಿಣದ ಶೋಧವು ಬಹು ಮುಖ್ಯವಾದುದೆಂಬುದನ್ನು ನೆನಪಿಡಬೇಕು. ಚಿತ್ರದುರ್ಗ, ಹಂಪಿ ಇವೇಮೊದಲಾದ ಜಾಗಗಳಲ್ಲಿ ಆದಿಮಾನವರು ಬರೆದಅತ್ಯಂತ ಸುಂದರವಾದ ಗುಹಾ ಚಿತ್ರಗಳು ಮತ್ತು ಬಂಡೆ ಚಿತ್ರಗಳು ದೊರಕಿವೆ. ರಾಮಾಯಣಕತೆಯಲ್ಲಿ ಬರುವ ವಾಲಿ, ಸುಗ್ರಿÃ, ಹನುಮಂತರಿದ್ದಕಿಷ್ಕಿಂಧೆಯು ಈಗಿನ ಹಂಪಿಯೇ ಎಂಬ ಐತಿಹ್ಯವಿದೆ.

ಕ್ರಿಸ್ತಪೂರ್ವದಲ್ಲಿಯೇಕರ್ನಾಟಕವುತನ್ನ ಸಂಸ್ಕೃತಿಯಿಂದಾಗಿಖ್ಯಾತಿಯನ್ನು ಪಡೆದಿದ್ದಿತು, ಕ್ರಿಸ್ತಶಕಎರಡನೆಯ ಶತಮಾನದಟಾಲೆಮಿ ಎಂಬ ಗ್ರಿÃಕ್ ಭೂಗೋಳಜ್ಞನುಬದಿಯಮೈ’ (ಬಾದಾಮಿ), ‘ಮದೌಗೌಲ’ (ಮುದುಗಲ್), ‘ಬನವೊಸೆಯ್’(ಬನವಾಸಿ), ‘ಹಿಪ್ಪೊಕೂರ’(ಹೂವಿನ ಹಿಪ್ಪರಗಿ) ಜಾಗಗಳನ್ನು ಹೆಸರಿಸಿದ್ದಾನೆ. ಅಲ್ಲದೆಅದೇಟಾಲೆಮಿಯುಪುನ್ನಾಟ (ದಕ್ಷಿಣಕರ್ನಾಟಕದತುತ್ತತುದಿ) ಮತ್ತುಮಲಿಪ್ಪಲ (ಮಲ್ಪೆ) ವೈಢೂರ್ಯಗಳನ್ನು ಕೊಂಡಾಡಿದ್ದಾನೆ.

ಕನ್ನಡ ಭಾಷೆ, ಸಾಹಿತ್ಯಗಳ ಪ್ರಾಚೀನತೆ

ಕನ್ನಡವು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು.ಅದರಇತಿಹಾಸವುಕ್ರಿಸ್ತಪೂರ್ವಐದುಆರನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವಮಟಚಿಪದವು (ಮಿಡತೆ) ಕನ್ನಡ ಪದವೆಂದು ಹೇಳಲು ಸಾಧ್ಯವಿದೆ. ಚಿತ್ರದುರ್ಗ ಜಿಲ್ಲೆಯ ಕ್ರಿಸ್ತ ಪೂರ್ವ ಮೂರನೆಯ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸದಲ್ಲಿಇಸಿಲಎಂಬ ಅಚ್ಚಗನ್ನಡ ಪದವಿದೆ. ಈಜಿಪ್ಟಿನ ಆಕ್ಸಿರಿಂಖಸ್ ಎಂಬಲ್ಲಿ ದೊರೆತ ಪೆಪೈರಿ ಸುರುಳಿಗಳಲ್ಲಿ ಕ್ರಿಸ್ತಶಕಎರಡನೆಯ ಶತಮಾನದ ಕೆಲವು ಗ್ರಿಕ್ ಪ್ರಹಸನಗಳು ದೊರೆತಿವೆ. ಪ್ರಹಸನಗಳಲ್ಲಿ ಕೆಲವು ಪಾತ್ರಗಳು ಆಡುವ ಭಾಷೆಕನ್ನಡವೆಂದು ಕೆಲವರು ಹೇಳುತ್ತಾರೆ (ಅದು ತುಳು ಎಂದು ಹೇಳುವವರರೂ ಇದ್ದಾರೆ).

ನಮಗೆ ದೊರಕುವ ಮೊದಲ ಕನ್ನಡದದೊಡ್ಡ ಬರಹವೆಂದರೆ ಸುಮಾರುಕ್ರಿ.. ೪೫೦ರ ಬೇಲೂರುತಾಲ್ಲೂಕಿನ ಹಲ್ಮಿಡಿ ಶಿಲಾಶಾಸನ. ಇದುಕನ್ನಡಿಗರ ಶರ್ಯ, ಸಾಹಸಗಳನ್ನೂ,ದಾನಗುಣವನ್ನೂಚಿತ್ರಿಸುತ್ತದೆ.ಕನ್ನಡ ದೊರೆಗಳಾದ ಕದಂಬರಿಗೂ,ಅವರ ಸ್ಪರ್ಧಿಗಳಾಗಿದ್ದ ಕಂಚಿಯ ಪಲ್ಲವರಿಗೂಯುದ್ಧ ನಡೆದಾಗ,ಕದಂಬರ ಪರವಾಗಿ ವಿಜಅರಸ ಎಂಬ ಶೂರನು ಹೋರಾಡಿಜಯವನ್ನು ಗಳಿಸಿಕೊಡುತ್ತಾನೆ. ಆಗ ಅವನ ಖಡ್ಗವನ್ನುಎಲ್ಲರಎದುರಿಗೆ ತೊಳೆದು, ಸನ್ಮಾನಿಸಿ, ಅವನಿಗೆ ಹಲ್ಮಿಡಿಗ್ರಾಮವನ್ನು ಉಂಬಳಿಯಾಗಿ ಬಿಟ್ಟುಕೊಡುತ್ತಾರೆ (ಇಂತಹ ದಾನಗಳನ್ನುಬಾಳ್ಗಳ್ಚುಎಂದುಕರೆಯುತ್ತಿದ್ದರು. ಬಾಳ್-ಕತ್ತಿ, ಕಳ್ಚು-ತೊಳೆ).

ಅವನು ತನಗೆ ಉಂಬಳಿಯಾಗಿ ಬಂದ ಹಲ್ಮಿಡಿಗ್ರಾಮದ ಕೆಲವು ಗದ್ದೆಗಳನ್ನು ವಿದ್ವಾಂಸರಾದ ಬ್ರಾಹ್ಮಣರಿಗೆ ಬಿಟ್ಟುಕೊಡುತ್ತಾನೆ. ಸತ್ತ÷್ವಶಾಲಿಯಾದಗದ್ಯದಲ್ಲಿ ಶಾಸನ ಅಂದಿನ ಸಂಸ್ಕೃತಿಯಒಂದು ಭಾಗವನ್ನುಚಿತ್ರಿಸುತ್ತದೆ, ಶಾಸನದ ಭಾಷೆಯನ್ನು ಪೂರ್ವದ ಹಳೆÀಗನ್ನಡವೆನ್ನುತ್ತಾರೆ.ಅದೇಮುಂದೆ ಬೆಳೆದು ಎಂಟುಒಂಬತ್ತನೆಯ ಶತಮಾನದಲ್ಲಿ  ಹಳೆÀಗನ್ನಡವೆನ್ನಿಸಿಕೊಂಡಿತು, ಹಳೆಗನ್ನಡವು ಹನ್ನೊಂದನೆಯ ಶತಮಾನದಲ್ಲಿ ನಡುಗನ್ನಡವಾಯಿತು, ನಡುಗನ್ನಡವೇ ಮುಂದೆಆಧುನಿಕಕಾಲದಲ್ಲಿ ಹೊಸಗನ್ನಡಅಥವಾ ಈಗಿನ ಕನ್ನಡವಾಯಿತು. ಕನ್ನಡವು ಭಾರತದಅತ್ಯಂತ ಮಧುರವೂ, ಸಮರ್ಥವೂಆದ ಭಾಷೆಗಳಲ್ಲೊಂದು.

ಕನ್ನಡದಲ್ಲಿಕ್ರಿಸ್ತಪೂರ್ವದಿಂದಲೂ ಬಹು ಸುಂದರವಾದಜಾನಪದ ಸಾಹಿತ್ಯವಿದ್ದಿತು.ಕುಟ್ಟುವಾಗ, ಬೀಸುವಾಗ, ಕಳೆ ಕೀಳುವಾಗ, ತೊಟ್ಟಿಲುತೂಗುವಾಗ, ಕೋಲು ಹಿಡಿದುಕುಣಿಯುವಾಗ, ಹಬ್ಬಗಳಲ್ಲಿ ಕನ್ನಡಿಗರು ಹಾಡುಗಳನ್ನು ಹೇಳಿಕೊಂಡು ಸುಖಿಸುತ್ತಿದ್ದರು.ಮನಸ್ಸನ್ನುತುಂಬಿ, ದುಃಖವನ್ನು ಮರೆಸುತ್ತ, ಉನ್ನತ ಆದರ್ಶಗಳನ್ನುಅರಿವಿಗೆತಂದುಕೊಡುತ್ತಿದ್ದ ಕಾಲದ ಹಳ್ಳಿಯ ಹಾಡುಗಳು ಜನತೆಯ ನಾಲಗೆಯ ಮೇಲೆ ನಲಿದವು.ಅವನ್ನುಯಾರೂ ಬರೆದಿಡಲಿಲ್ಲವಾದ್ದರಿಂದ ಅವು ನಮಗೆ ಇಂದುದೊರಕುತ್ತಿಲ್ಲ. ಆದರೆತ್ರಿಪದಿಯ ಛಂದಸ್ಸಿನಲ್ಲಿ ರಚಿತವಾದಜಾನಪದ ಹಾಡುಗಳ ಏಳನೆಯ ಶತಮಾನಕ್ಕೆ ಸೇರಿದಒಂದು ಶಾಸನವು ಬಾದಾಮಿ ಪಕ್ಕದತಟ್ಟುಕೋಟೆ ಎಂಬ ಗ್ರಾಮದಲ್ಲಿದೊರಕಿದೆ.ಕಪ್ಪೆಅರಭಟ್ಟ ಎಂಬ ಒಬ್ಬವೀರನ ವರ್ಣನೆಅದು:

ಸಾಧುಗೆ ಸಾಧುಗೆ ಮಾಧರ್ಯಂಗೆ ಮಾಧರ್ಯನ್
ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್
ಮಾಧವನೀತನ್ ಪೆರನಲ್ಲ ||
ಒಳ್ಳಿತ್ತ ಕೆಯ್ವೊರಾರ್ ಪೊಲ್ಲದುಮದರಂತೆ
ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತ-
ಮಿಲ್ಲಿ ಸಂಧಿಕ್ಕುಮದು ಬಂದು ||
ಕಟ್ಟಿದ ಸಿಂಘಮನ್ ಕೆಟ್ಟೊÃದೇನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂಗಹಿತರ್ಕ್ಕಳ್
ಕೆಟ್ಟರ್ ಮೇಣ್ ಸತ್ತರವಿಚಾರಂ ||

ವೀರ ಒಳ್ಳೆಯವರಿಗೆ ಒಳ್ಳೆಯವನು; ಕೆಟ್ಟವರಿಗೆತೀರಾಕೆಟ್ಟವನು. ಅವನನ್ನುಕೆಣಕುವುದೂಒಂದೇ, ಕಟ್ಟಿದ ಸಿಂಹವನ್ನು ಬಿಚ್ಚಿಎದುರಿಸುವುದೂಒಂದೇ. ಇದು Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought