Chania

ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ

ವೈಲೇಶ್ ಪಿ.ಎಸ್. ಕೊಡಗು 

                          ಅದೊಂದು ಪುಟ್ಟ ಪಟ್ಟಣ.  ಒಂದು ಪುಟ್ಟ ಸಂಸಾರ.  ಎಲ್ಲರ ಕಣ್ಣು ಕುಕ್ಕುವ ಹಾಗಿದ್ದ ಜೋಡಿಗಳಿಗೆ ಚಿನ್ನದಂತಹ ಇಬ್ಬರು ಮಕ್ಕಳು. ಇವರದು ಪ್ರೇಮ ವಿವಾಹವಾದ ಕಾರಣ ಎರಡೂ ಕುಟುಂಬದಿಂದ ಹೊರಗಿದ್ದರೂ, ಇವರು ರಾಜ ರಾಣಿಯರಂತೆಯೇ ಇದ್ದರು.


                          ಅದೇನಾಯಿತೋ ಏನೋ! ಇದ್ದಕ್ಕಿದ್ದಂತೆ ಒಂದು ದಿನ ಮೂರು ವರ್ಷದ ಗಂಡು ಮಗುವಿಗೆ ಆರೋಗ್ಯ ಹದಗೆಟ್ಟಿತು. ಗಂಡ ಮನೆಯಿಂದ ದೂರದ ಊರಿಗೆ ಕರ್ತವ್ಯ ನಿಮಿತ್ತ ಹೋಗಿದ್ದಾನೆ. ಈಕೆಗೆ ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ ಅಳುವುದನ್ನು ಬಿಟ್ಟರೆ ಬೇರೇನೂ ಗೊತ್ತಾಗುತ್ತಿಲ್ಲ. ಮನದಲ್ಲಿ ಅಂದುಕೊಳ್ಳುತ್ತಾಳೆನನ್ನ ಗಂಡ ನನ್ನನ್ನು ಮನೆಯಿಂದ ಹೊರಗೆ ಕಾಲಿಡದಷ್ಟು ಪ್ರೀತಿಯಿಂದ ಸಾಕುತ್ತಿದ್ದಾರೆ.’
                          ಆದರೆ ಮಗುವಿನ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಊರಿನಲ್ಲಿ ಆಸ್ಪತ್ರೆಗೆ ಹೋಗುವ ದಾರಿ ಯಾವುದು? ನಿತ್ಯ ಮಗಳನ್ನು ಅಂಗನವಾಡಿಗೆ ಕರೆದೊಯ್ಯುವ ಆಟೋ ಚಾಲಕನ ದೂರವಾಣಿ ಸಂಖ್ಯೆ ಏನು? ಯಾವುದೂ ಗೊತ್ತಿಲ್ಲ. ಹೋಗಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ಇಂದಿನವರೆಗೂ ನಾನು ಹೋಗಿ ನೋಡಿಲ್ಲ ಏನು ಮಾಡಲಿ ಎಂದು ಅಳುತ್ತಾ ಕುಳಿತಳು
                         

                          ಅವಳ ಅಳುವನ್ನು ಕಂಡು ಪಕ್ಕದ ಮನೆಯ ರುಕ್ಮಿಣಿ ಆಂಟಿ, ‘ಏನಾಯಿತು?’ ಎಂದು ಕೇಳಿ, ಮುಂದಿನ ಕೆಲಸ ಕಾರ್ಯಗಳು ಸಾಂಗವಾಗಿ ನಡೆದು, ಗಂಡ ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸುಖಾಂತ್ಯವಾಗಿತ್ತು.   


                          ಬೆಂಗಳೂರಿನಲ್ಲಿ ನೌಕರಿ ಹಿಡಿದು ಸತಿಮಣಿಯೊಂದಿಗೆ  ಆಗಮಿಸಿದ ಧ್ಯಾನ್ ದೊಡ್ಡ ಅಪಾರ್ಟ್ಮೆಂಟ್ನಲ್ಲಿ ಮನೆ ಮಾಡಿ, ಅಲ್ಲಿಂದ ತನ್ನದೇ ಸ್ವಂತ ವಾಹನದಲ್ಲಿ ಓಡಾಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಒಂದು ದಿನ ತನ್ನ ವಾಹನವನ್ನು ಪಾರ್ಕಿಂಗ್  ಲಾಟ್ನಲ್ಲಿ ನಿಲ್ಲಿಸಿ, ರಸ್ತೆ ದಾಟುವ ಭರದಲ್ಲಿ, ಯಾವುದೋ ಸ್ಕೂಟರಿಗೆ ಅಡ್ಡ ಸಿಲುಕಿದ. ಕೆಳಗೆ ಬಿದ್ದ ರಭಸಕ್ಕೆ ತಪ್ಪಿದ ಪ್ರಜ್ಞೆ ಮೂರು ದಿನವಾದರೂ ವಾಪಸ್ಸು ಬರಲೇ ಇಲ್ಲ

                          ಈ ಅಚಾತುರ್ಯದಿಂದ ಆಸ್ಪತ್ರೆ ಸೇರಿದ ಧ್ಯಾನ್ ಪತ್ನಿಗೆ ವಿಷಯವೇ ಗೊತ್ತಿಲ್ಲ. ಪಾರ್ಕಿಂಗ್ ಲಾಟ್ನಲ್ಲಿ ಲಾಕ್ ಆಗಿದ್ದ ಕಾರಿನೊಳಗೆ ಕುಳಿತಿದ್ದ ಮೊಬೈಲ್ ಪೋನ್ ಒಂದು ದಿನದ ಬಳಿಕ ಸದ್ದು ಮಾಡದೇ ಸುಮ್ಮನಾಯಿತು. ದಿವ್ಯಳಿಗೆ ಏನೂ ಮಾಡಲೂ ತೋಚದೆ, ತಾಯಿ ಮನೆಗೆ ಪೋನ್ ಮಾಡಿದಳು. ಆಕೆಯ ಅಣ್ಣ ಬಂದು ಮನೆಗೆ ತಲುಪಿದ ನಂತರ, ದಿನ ಪತ್ರಿಕೆಯಲ್ಲಿ ಕಂಡ ಧ್ಯಾನ್ ಪೋಟೋ ಮತ್ತು ವಿವರಗಳನ್ನು ನೋಡಿ ಆಸ್ಪತ್ರೆ ತಲುಪಿದ; ಧ್ಯಾನ್ಗೆ ತನಗೆ ಏನಾಗಿದೆ ಹಾಗೂ ಎಲ್ಲಿದ್ದೇನೆ ಎಂಬ ಅರಿವೇ ಇರಲಿಲ್ಲ.


                          ಬಂಧುಗಳೇ ಇಲ್ಲಿ ಬರೆದಿರುವ  ಸಂಗತಿಗಳನ್ನು ಓದಿದಾಗ ನಿಮಗೆ ಕಥೆಯಂತೆ ತೋರಿರಬಹುದು. ಆದರೆ ವಾಸ್ತವವಾಗಿ ಇವು ನಡೆದ  ಘಟನೆಗಳು. ಇದಕ್ಕಿಂತ ಇನ್ನೊಂದು ಘಟನೆ ಹೇಳುವೆ ಕೇಳಿ. ಹಾಸನದ ನಮ್ಮ .ರಾ..ಸಾ.ಸಂಸ್ಥೆಯ ಒಬ್ಬ ಚಾಲಕ  ಕರ್ತವ್ಯ ಮುಗಿಸಿ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ, ಪುಟ್ಟ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ. ಆತನ ಮನೆಗೆ ಫೋನ್ ಮಾಡಿದರೆ, ಆತನ ಪತ್ನಿಗೆ ನಗರದಲ್ಲಿ ಯಾವುದೇ ಬೀದಿಯ ಪರಿಚಯ ಕೂಡ ಇಲ್ಲ. ಕಡೆಗೆ ದೂರದ ಊರಿನಿಂದ ಚಾಲಕನ ಮನೆಯವರು ಬಂದ ಬಳಿಕವೇ ಆತನ ಚಿಕಿತ್ಸೆಗೆ ಸಾಧ್ಯವಾಯಿತು.


                          ಮೇಲ್ಕಂಡ ಎಲ್ಲರೂ, ತಾವು ಯಾವುದೇ ರೀತಿಯ ದೊಡ್ಡ ಹಾಗೂ ಪುಟ್ಟ ಕೆಲಸದ ಮೇಲೆ ಇದ್ದರೂ, ತಮ್ಮ ತಮ್ಮ ಪತ್ನಿಯರನ್ನು ಅತ್ಯಂತ ಉತ್ತಮ ರೀತಿಯಲ್ಲಿ ಸಾಕುತ್ತಿರುವುದು ತಮಗೆಲ್ಲರಿಗೂ ಅರಿವಾಗುತ್ತಿದೆ. ನನ್ನ  ಭಾವೀ ಪತ್ನಿಯನ್ನು ಅವರ ಮನೆಯಲ್ಲಿ ಶಾಲೆಗೆ ಹೋಗುವಾಗ ಕೂಡ ಕರೆದುಕೊಂಡು ಹೋಗಿ ಮತ್ತೆ ಕರೆದುಕೊಂಡು ಬರುತ್ತಿದ್ದರು. ಮದುವೆಯ ನಂತರ ಆಕೆಯನ್ನು ಕರೆದುಕೊಂಡು ಹೋಗಲು ಮತ್ತು ಕರೆದುಕೊಂಡು ಬರಲು ಯಾರಾದರೊಬ್ಬರು ಆಕೆಯ ಜೊತೆಗೆ ಇರಲೇಬೇಕಿತ್ತು.


                          ಇಂತಹ ಪರಿಸ್ಥಿತಿಯಲ್ಲಿ ಆಕೆಯನ್ನು ಮದುವೆಯಾದ ನಾನು, ನಮ್ಮ ಮನೆಯ ಕಾಂಪೌಂಡ್ನಿಂದ ಆಚೆಗೆ ಕಳಿಸದಂತೆ ಅವಳನ್ನು ಸಾಕುತ್ತಿದ್ದೆ ಹಾಗೂ ಆಕೆ ನಮ್ಮ ಮನೆಯ ಕಾಂಪೌಂಡಿನಿಂದ ಹೊರಗಡೆ ಹೋದರೆ ಅದು ಎದುರುಗಡೆ ಇರುವ ಬಾವಿಯ ನೀರಿಗೆ ಮಾತ್ರ ಆಗಿರುತ್ತಿತ್ತು. ಬೇರೆ ಯಾವುದೇ ಕಾರಣಕ್ಕೆ ಮನೆಯಿಂದ ಹೊರ ಹೋಗುವುದು ಇದ್ದಲ್ಲಿ ಅವಳ ಜೊತೆಗೆ ಬೇರೆ ಯಾರಾದರೂ ಇರಲೇಬೇಕಿತ್ತು. ಅದು ಅವಳ ತಂದೆಯ ಮನೆಯಿಂದ ಬಂದ ಬಳುವಳಿಯಾಗಿತ್ತು.  ಒಬ್ಬಳೇ ಪೇಟೆಗಾಗಲಿ ಅಥವಾ  ಅಂಗಡಿಯಿಂದ ಚಿಕ್ಕ ಪುಟ್ಟ ವಸ್ತುಗಳನ್ನು ಖರೀದಿಸಲೂ ಕೂಡ ಆಕೆ ಹೋಗುತ್ತಿರಲಿಲ್ಲ.


                          ಸಾವಿರದ ಒಂಬೈನೂರ ಎಂಬತ್ತೊಂಬತ್ತನೇ ಇಸವಿಯಲ್ಲಿ ನಮ್ಮ ಮದುವೆಯಾಯಿತು. ಆನಂತರ ಸಾವಿರದ ಒಂಬೈನೂರ ತೊಂಬತ್ತಾರನೆಯ ಇಸವಿಯಲ್ಲಿ ನನಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ದೊರೆಯಿತು.  ಕೆಲಸ ದೊರೆತ ಹೊಸತರಲ್ಲಿ ಆರಂಭಿಕ ತರಬೇತಿ ಎಂಬ ಒಂದು ಚಿಕ್ಕ ತರಬೇತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರಿಗೂ ಕೊಡಲಾಗುತ್ತದೆ.  ನಮಗೆ ಮಂಗಳೂರಿನಲ್ಲಿ ಕೇವಲ ಪರಿಚಯ ತರಬೇತಿ ತಾತ್ಕಾಲಿಕವಾಗಿ ನೀಡಲಾಯಿತು.   ಬಳಿಕ ಮುಂದಿನ ತರಬೇತಿಯನ್ನು  ಹಾಸನದ ತರಬೇತಿ ಶಿಬಿರದಲ್ಲಿ ಎರಡು ವರ್ಷಗಳ ನಂತರ ನೀಡಲಾಯಿತು. ನಮ್ಮ ಮನೆಯ ಸಂಪೂರ್ಣ ಮಾಹಿತಿಯನ್ನು ಪಡೆದು, ಬಳಿಕ ಇಲ್ಲಿ ಮೇಲ್ಕಂಡ ವಿಷಯವನ್ನು ತಿಳಿಸಿ, ರೀತಿ ನಿಮ್ಮ ಮನೆಯಲ್ಲಿ ಕೂಡ ಆಗಬಹುದು. ಆದ್ದರಿಂದ ತಮ್ಮ ಮನೆಯಲ್ಲಿ ಮಡದಿ ಮತ್ತು ಮಕ್ಕಳಿಗೆ ಪ್ರತಿಯೊಂದು ವಿಷಯವನ್ನು ಕಲಿಸುವ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳಬೇಕು ಎಂದು ಅತ್ಯಂತ ಖಡಾಖಂಡಿತವಾಗಿ ತಿಳಿಸಿದರು


                          ಆ ರೀತಿಯ ತರಬೇತಿಯನ್ನು ಪಡೆದು ಬಂದ ನಾನು ಮನೆಯಲ್ಲಿ ನಿಧಾನವಾಗಿ ಅವರಿಗೆ ಒಂದೊಂದೇ ವಿಷಯವನ್ನು ತಿಳಿಸುತ್ತಾ ಬಂದೆ. ಹೇಗೆಂದರೆ ಮೊದಲಿಗೆ ತಿಂಗಳಿಗೆ ಬೇಕಾದ ಮನೆಬಳಕೆಯ, ದಿನಬಳಕೆಯ ವಸ್ತುಗಳನ್ನು ತರಲು ಹಣ ಕೊಟ್ಟು ಅವಳ ಜೊತೆ ನಾನು ಸುಮ್ಮನೆ ನಿಲ್ಲುತ್ತಿದ್ದೆ  ಅವಳಿಂದಲೇ ಎಲ್ಲವನ್ನೂ ಖರೀದಿಸಿ, ಅದನ್ನು ಮನೆಗೆ ತರುವ ವ್ಯವಸ್ಥೆಯನ್ನು ಅವಳಿಂದಲೇ ಮಾಡಿಸಿ, ನಾನು ಏನೂ ಅರಿಯದವನಂತೆ ಜೊತೆಯಲ್ಲಿ ನಿಂತಿರುತ್ತಿದ್ದೆ.  ಬರುಬರುತ್ತಾ ನಿಧಾನವಾಗಿ ನಾನು ಹೋಗದೆ ಅವಳೊಬ್ಬಳನ್ನೇ ಕಳುಹಿಸಿ, ಮನೆಗೆ ಬೇಕಾದ ವಸ್ತುಗಳನ್ನು ತರಲು ತಿಳಿಸುತ್ತಿದ್ದೆ.  ಮುಂದೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಮತ್ತು ಕರೆದುಕೊಂಡು ಬರುವ ಕೆಲಸವನ್ನು ಕೂಡ ಅವರಿಗೆ ಒಪ್ಪಿಸಿದೆ. ಆನಂತರ ಮಕ್ಕಳನ್ನು  ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಬೇಕಾದ  ಸಂದರ್ಭಗಳಲ್ಲಿ ಕೂಡ ಅವಳನ್ನು ಮಕ್ಕಳ ಜೊತೆಗೂಡಿ ಕಳಿಸುವ ಅಭ್ಯಾಸ ಮಾಡಿಕೊಂಡೆ


                          ಇಂತಹ ದಿನಗಳಲ್ಲಿ ಒಂದು ಸುಸಂದರ್ಭ ಎನ್ನುವಂತೆ ಗ್ರಾಮ ಪಂಚಾಯತಿ ಚುನಾವಣೆ ಬಂದಿತ್ತು. ಸಂದರ್ಭದಲ್ಲಿ ಒಂದು ರಾಷ್ಟ್ರೀಯ ಪಕ್ಷದ ವತಿಯಿಂದ ಗ್ರಾಮ ಪಂಚಾಯತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಂದರ್ಭ ಕೂಡ ಒದಗಿ ಬಂತು. ಬಳಿಕ ಗ್ರಾಮ ಪಂಚಾಯಿತಿಯ ಅರ್ಧ ಅವಧಿ ಮುಗಿದು, ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದಿಗೆ ನಮ್ಮ ಕೆಟಗೆರಿಯ ಸರದಿಯೂ ಬಂತು.  ಅದರಲ್ಲಿ ಒಂದೇ ಕೆಟಗೆರಿಗೆ ಸೇರಿದ ಇಬ್ಬರು ಅಂದರೆ ಒಬ್ಬ ಪುರುಷ ಮತ್ತೊಬ್ಬರು ನನ್ನಾಕೆ. ಸರಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಧ್ಯಕ್ಷರು ಕಾರ್ಯದರ್ಶಿಗಳು ಎಲ್ಲರೆದುರೂ ಒಪ್ಪಂದ ಮಾಡಿಕೊಂಡು ಮೊದಲ ಹನ್ನೆರಡು ಮಾಸ ಪುರುಷ ಅಭ್ಯರ್ಥಿಗೆ ಅವಕಾಶ ಹಾಗೂ ನಂತರದ ಹನ್ನೆರಡು ಮಾಸಗಳ ಅವಧಿಗೆ ನನ್ನ ಪತ್ನಿಗೆ ಅಧ್ಯಕ್ಷ ಗಾದಿ ಎಂದು ತೀರ್ಮಾನವಾಯಿತು.


                          ಹನ್ನೆರಡು ತಿಂಗಳ ನಂತರ ಮತ್ತೆ ಮೂರು ತಿಂಗಳಾದರೂ ಮಹಾಶಯ ಅಧ್ಯಕ್ಷ ಗಾದಿಗೆ ರಾಜಿನಾಮೆ ನೀಡುವುದಾಗಲೀ; ನನ್ನಾಕೆಗೆ ಅಧಿಕಾರ ಹಸ್ತಾಂತರ ಮಾಡುವ ಯೋಚನೆ ಕೂಡ ಮಾಡಲಿಲ್ಲ. Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought