ಗುರುರಾಜ ಹೊಸಕೋಟೆ : ಜನಪದ ಶೈಲಿಯ ಜಾನಪದ ಮಾಂತ್ರಿಕ
ಈ ಬಾರಿ ಹೇಳ ಹೊರಟಿರುವುದು ಜನಪದ ಮಾಂತ್ರಿಕನ ಕುರಿತು. ಕೌಟುಂಬಿಕ ಸಂಬಮಧಗಳಲ್ಲಿನ ಏರಿಳಿತಗಳನ್ನು ತಮ್ಮ ಸೂಕ್ಕ್ಷ್ಮ ಚಕ್ಕ್ಷುಗಳಿಂದ ಕಂಡು ತಪ್ಪುಗಳನ್ನು ತಿದ್ದುತ್ತಲೇ ನೈತಿಕತೆಯ ಒಲವು ಮೂಡಿಸಿದ, ಬದುಕನ್ನು ಸಹನಗೊಳಿಸಿದ ಸರಳ ಜೀವಿಯ ಕುರಿತು. ಕನ್ನಡಿಗರ ಮನೆ-ಮಾತಾಗಿರುವ ಈ ಗಾಯಕ ತಮ್ಮ 70 ರ ಹರೆಯದಲ್ಲೂ ಜೀವಪರ ಯೋಚನೆಗಳನ್ನು ಮಾಡುತ್ತ, ಹಾಡು ಕಟ್ಟುತ್ತ-ಕಟ್ಟುತ್ತ ಅವುಗಳಿಗೆ ಲಯಬದ್ಧವಾದ ರಾಗಗಳನ್ನು ಜೋಡಿಸುತ್ತ, ಮನ ತುಂಬಿ ಹಾಡಿದ್ದಾರೆ. ಕೇಳುಗರು ಮಂತ್ರ ಮುಗ್ಧರಾಗುತ್ತಾರೆ. ಭಾವಪರವಶರಾಗುತ್ತಾರೆ. ಸಾರ್ವಜನಿವಾಗಿ ಈಗಾಗಲೇ 12,000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ ಕರುನಾಡಿನ ಉದ್ದಗಲಕ್ಕೂ ನಡೆದಾಡಿದ ಈ ಜಾನಪದ ಜಂಗಮರೇ ಗುರುರಾಜ ಹೊಸಕೋಟೆಯವರು.
Share your thought